ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಚಾಲನೆ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ 6 ಯಕ್ಷಗಾನ ಮೇಳಗಳ 2019-20 ನೇ ಸಾಲಿನ ತಿರುಗಾಟಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಕಟೀಲು ಶ್ರೀದೇವಿಯ ಗರ್ಭಗುಡಿಯ ಮುಂದೆ ಕಲಾವಿದರಿಗೆ ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಗೆಜ್ಜೆಗಳನ್ನು ನೀಡುವ ಮೂಲಕ ಈ ವರ್ಷದ ಯಕ್ಷಗಾನಕ್ಕೆ ಚಾಲನೆ ದೊರೆತಿದೆ. ಕಟೀಲು ದೇವಳದ ಆಡಳಿತ ಮೊಕ್ತೇಸರ ಕೊಡೆತ್ತೂರು ಗುತ್ತು ಸನತ್ ಕುಮಾರ್ ಶೆಟ್ಟಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಆಸ್ರಣ್ಣ ಬಂಧುಗಳು , ತಂತ್ರಿಗಳು ದೇವಳದ ಅರ್ಚಕ ವೃಂದದವರು, ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಮೇಳಗಳ ಮೆನೇಜರುಗಳು, ಕಲಾವಿದರು ಹಾಗೂ ಸಹಸಾರು ಭಕ್ತಾಧಿಗಳು ಉಪಸ್ಥಿತರಿದ್ದರು. ಶ್ರೀ ದೇವಿಯ ಮುಂದೆ ಗೆಜ್ಜೆ ಕಟ್ಟಿ ಕುಣಿಯಲಾಯಿತು.
0 5

Details

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ 6 ಯಕ್ಷಗಾನ ಮೇಳಗಳ 2019-20 ನೇ ಸಾಲಿನ ತಿರುಗಾಟಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಕಟೀಲು ಶ್ರೀದೇವಿಯ ಗರ್ಭಗುಡಿಯ ಮುಂದೆ ಕಲಾವಿದರಿಗೆ ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಗೆಜ್ಜೆಗಳನ್ನು ನೀಡುವ ಮೂಲಕ ಈ ವರ್ಷದ ಯಕ್ಷಗಾನಕ್ಕೆ ಚಾಲನೆ ದೊರೆತಿದೆ.
ಕಟೀಲು ದೇವಳದ ಆಡಳಿತ ಮೊಕ್ತೇಸರ ಕೊಡೆತ್ತೂರು ಗುತ್ತು ಸನತ್ ಕುಮಾರ್ ಶೆಟ್ಟಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಆಸ್ರಣ್ಣ ಬಂಧುಗಳು , ತಂತ್ರಿಗಳು ದೇವಳದ ಅರ್ಚಕ ವೃಂದದವರು, ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಮೇಳಗಳ ಮೆನೇಜರುಗಳು, ಕಲಾವಿದರು ಹಾಗೂ ಸಹಸಾರು ಭಕ್ತಾಧಿಗಳು ಉಪಸ್ಥಿತರಿದ್ದರು. ಶ್ರೀ ದೇವಿಯ ಮುಂದೆ ಗೆಜ್ಜೆ ಕಟ್ಟಿ ಕುಣಿಯಲಾಯಿತು.

Reviews

Write Your Review

Rating :